ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎನ್ಎಸ್ಡಿ ಕಲಾವಿದರು
ಲೇಖಕರು : ಉದಯವಾಣಿ
ಶನಿವಾರ, ಜನವರಿ 9 , 2016
|
ಜನವರಿ 9, 2016
|
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎನ್ಎಸ್ಡಿ ಕಲಾವಿದರು
ಉಡುಪಿ :
ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ 30 ಮಂದಿ ಕಲಾವಿದರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನದ ನಾಟ್ಯಾಭಿನಯಗಳನ್ನು ಕಲಿಯುತ್ತಿದ್ದಾರೆ. ಇವರಲ್ಲಿ 21 ಮಂದಿ ನಟನಟಿಯರಿದ್ದರೆ ಉಳಿದ ಒಂಬತ್ತು ಮಂದಿ ವಿನ್ಯಾಸಕಾರರು.
ದೇಶ-ವಿದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿರುವ ಬನ್ನಂಜೆ ಸಂಜೀವ ಸುವರ್ಣರಿಗೆ ಈ ಅನುಭವ ಹೊಸತೇನೂ ಅಲ್ಲ. ಈ ಸಲ 1695ರಲ್ಲಿ ದೇವಿದಾಸ ಬರೆದ ಚಕ್ರವ್ಯೂಹ ಪ್ರಸಂಗವನ್ನು ಹಿಂದಿ ಭಾಷೆಯಲ್ಲಿ ರಂಗಕ್ಕೇರಿಸುತ್ತಿದ್ದಾರೆ. ಪ್ರಸಂಗ ಪಠ್ಯ ವನ್ನು ಕವಯಿತ್ರಿ ಮಾಧವಿ ಭಂಡಾರಿ ಹಿಂದಿಗೆ ಅನುವಾದಿಸು ತ್ತಿದ್ದಾರೆ. ಚಕ್ರವ್ಯೂಹ ಪ್ರಸಂಗದ ಪಾತ್ರಗಳಿಗೆ ಬೇಕಾಗು ವಷ್ಟು ಮಾತ್ರವಲ್ಲ, ಇಡೀ ಯಕ್ಷಗಾನದ ರಾಗ, ಮಟ್ಟ, ತಾಳ, ಹೆಜ್ಜೆ , ಅಭಿನಯಗಳ ಪ್ರಾಥಮಿಕ ಪರಿಚಯ ವನ್ನು ವಿದ್ಯಾರ್ಥಿಗಳಿಗೆ ಮಾಡಿಸುವುದು ಕೂಡ ಈ ಕಲಿಕೆಯ ಮುಖ್ಯ ಉದ್ದೇಶವಾಗಿದೆ. ಎನ್ಎಸ್ಡಿ ನಿರ್ದೇಶಕ ವಾಮನ ಕೇಂದ್ರೆ, ಶೈಕ್ಷಣಿಕ ವ್ಯವಹಾರಗಳ ಡೀನ್ ಶಂತನು ಬೋಸ್ ಈಗಾಗಲೇ ಕೇಂದ್ರಕ್ಕೆ ಭೇಟಿ ಕೊಟ್ಟು ಯಕ್ಷಗಾನ ತರಗತಿಗಳನ್ನು ವೀಕ್ಷಿಸಿದ್ದಾರೆ.
ಯಕ್ಷಗಾನ ಕೇಂದ್ರದಲ್ಲಿ ಲಕ್ಷ್ಯ, ಲಕ್ಷಣಾಧಾರಿತ ಪಾಠಕ್ರಮದ ಸಂಪ್ರದಾಯವಿರುವುದರಿಂದ ಹೊರನಾಡಿನ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಸುಲಭ, ಅವರು ಬೇಗನೆ ಗ್ರಹಿಸುವುದಕ್ಕೂ ಅನುಕೂಲವಾಗುತ್ತದೆ.
ಕೃಪೆ :
udayavani
|
|
|